Posted by admin on 2023-05-28 13:34:35 |
Share: Facebook | Twitter | Whatsapp | Linkedin
ನವದೆಹಲಿ: ಹೊಸ ಸಂಸದ ಭವನದ ಉದ್ಘಾಟನಾ ಸಮಾರಂಭದಲ್ಲಿ ಬನಾರಸನ ಡಾ. ಇಂದು ಜೈನ ಅವರು ಸರ್ವಧರ್ಮ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವರು. ಉದ್ಘಾಟನಾ ಸಮಾರಂಭದಲ್ಲಿ ಇಂದು ಜೈನ ಅವರಿಗೆ ಜೈನ ಧರ್ಮದವನ್ನು ಪ್ರತಿನಿಧಿಸುವ ಗೌರವ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 28 ನೇ ಮೇ 2023 ರಂದು ಹೊಸ ಸಂಸದ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂಧರ್ಭದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅರ್ಧ ತಾಸು ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಎಲ್ಲ ಧರ್ಮದ ಜನರು ವಿಶೇಷ ಪ್ರಾರ್ಥನೆಯನ್ನು ಮಾಡಲಿದ್ದಾರೆ. ಈ ವಿಶೇಷ ಸಂಧರ್ಭದಲ್ಲಿ ಡಾ.ಇಂದು ಜೈನ ಅವರ ಮುಖಾಂತರ ಹೊಸ ಸಂಸತ್ ಭವನದಲ್ಲಿ ಮತ್ತೊಮ್ಮೆ ಜೈನ ಪ್ರಾರ್ಥನೆಯ ಧ್ವನಿಗಳು ಪ್ರತಿಧ್ವನಿಸಲಿವೆ.ಡಾ. ಇಂದು ಜೈನ ರವರು ಹೊಸ ಸಂಸದ್ ಭವನ ಭೂಮಿ ಪೂಜೆ ಸಂಧರ್ಭದಲ್ಲಿಯೂ ಜೈನ ಧರ್ಮವನ್ನು ಪ್ರತಿನಿಧಿಸಿದ್ದರು.