Posted by admin on 2023-06-19 11:19:56 |
Share: Facebook | Twitter | Whatsapp | Linkedin
ಉದಯಪುರ: ದಿನಾಂಕ 4-6-2023 ರಂದು ನಗರದ ಕೇಂದ್ರ ಕಾರಾಗ್ರಹದಲ್ಲಿ ಕೈದಿಗಳಿಗೆ ಜೈನ ಸಾಧ್ವಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ವೇದಿಕೆ ಮೇಲಿನ ಜೈನ ಸಾಧ್ವಿಯರಾದ ಮಹಾಸತಿ ಋತುಶ್ರೀ, ಮಹಾಸತಿ ಜಲಜ ಹಾಗೂ ಮಹಾಸತಿ ಗುಂಜನ ಮಾತಾಜಿಯವರು ಅಹಿಂಸೆಯ ಮಂತ್ರ ಪಠಿಸುತ್ತಿದ್ದಂತೆ ಅಲ್ಲಿದ್ದ ಕೈದಿಗಳು ಕೂಡ ಅವರೊಟ್ಟಿಗೆ "ನನ್ನ ಅಪರಾಧದ ಆಲೋಚನೆಯಾಗಲಿ, ಪ್ರತಿ ಜೀವಿಗಳಲ್ಲಿ ನನ್ನ ಕ್ಷಮೆಯಿರಲಿ" ಎಂದು ಅಹಿಂಸೆಯ ಮಂತ್ರ ಪಠಿಸಿದರು. ಇದೆ ಸಂಧರ್ಭದಲ್ಲಿ ಜೈನ ಸಾಧ್ವಿಗಳು, ತಮ್ಮ ಜೀವನದಲ್ಲಿ ಸುಧಾರಣೆ ತರುವಂತೆ ಮತ್ತು ವ್ಯಸನಗಳಿಂದ ದೂರವಿರುವಂತೆ ಕೈದಿಗಳಿಗೆ ಸಲಹೆ ನೀಡಿದರು.